ಜಿಲ್ಲಾಮಟ್ಟದ ಜ್ಞಾನ – ವಿಜ್ಞಾನ ಮೇಳ -ಪ್ರಾಂತೀಯ ಮಟ್ಟಕ್ಕೆ ಆಯ್ಕೆ
ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ,ಇದರ ವತಿಯಿಂದ ವಿವೇಕಾನಂದ ಸೆಂಟ್ರಲ್ ಸ್ಕೂಲ್, ಪುತ್ತೂರು ಇಲ್ಲಿ ನಡೆದ ಜಿಲ್ಲಾಮಟ್ಟದ ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಪ್ರಾಂತೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲವರ್ಗದ ವಿಭಾಗದಲ್ಲಿ – ಅಭಿನವ್ ಪಿ.ಎನ್ –ಇನ್ನೋವೇಟಿವ್ ಮಾದರಿ ವಿಭಾಗದಲ್ಲಿ – ಪ್ರಥಮ,
ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ – ಶ್ರೇಯಸ್ ಎ,ಜೆ, ಅಂಜಲಿ, ಸುದೀಪ್ತ ಇವರ ತಂಡ – ಪ್ರಥಮ,
ಕಥಕಥನ ಸ್ಪರ್ಧೆ – ಶ್ರೀ ಕೃಷ್ಣ – ದ್ವಿತೀಯ ಸ್ಥಾನ ಪಡೆದಿರುತ್ತಾನೆ.
ಕಿಶೋರ ವರ್ಗದ ವಿಭಾಗದಲ್ಲಿ – ಮೌಲ್ಯ.ಜಿ – ಆಶುಭಾಷಣ- ಪ್ರಥಮ
ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ – ತ್ರಿಸ್ಥಾ ಭಟ್, ಶಿಲ್ಪಾ, ಸಿಂಚನಾ ಇವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.