ಉಡುಪಿ ಜಿಲ್ಲೆಯ ಅಲೆವೂರು ಪ್ರಗತಿ ನಗರದ ಜಿಲ್ಲಾ ಸ್ಕೌಟ್ಸ್-ಗೈಡ್ಸ್ ಭವನ ಮತ್ತು ಮಂಗಳೂರಿನ ಪಿಲಿಕುಳದ ಜಿಲ್ಲಾ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ನಡೆದ ರಾಜ್ಯಪುರಸ್ಕಾರ ಆಯ್ಕೆ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೈಡ್ಸ್ ವಿಭಾಗದಲ್ಲಿ ಶೈಲಶ್ರೀ ವಿ.ಯಸ್ (ವಿಠಲ ಎಂ. ಮತ್ತು ಸಾವಿತ್ರಿ ದಂಪತಿಗಳ ಪುತ್ರಿ), ಜನನಿ (ಕೃಷ್ಣಪ್ಪ ಗೌಡ ಮತ್ತು ಸುಶೀಲ ದಂಪತಿಗಳ ಪುತ್ರಿ), ಪೃಥಾ ಆರ್ ರೈ (ರವೀಂದ್ರ ರೈ.ಪಿ ಮತ್ತು ಉಷಾ ರವೀಂದ್ರ ದಂಪತಿಗಳ ಪುತ್ರಿ), ಪ್ರಣಮ್ಯ (ಗಣಪತಿ ನಾಯಕ್ ಮತ್ತು ಸುಲೋಚನ ದಂಪತಿಗಳ ಪುತ್ರಿ), ಸ್ವಸ್ತಿಕಾ (ಕೆ ಕೇಶವ ಆಚಾರ್ಯ ಮತ್ತು ಶುಭ ದಂಪತಿಗಳ ಪುತ್ರಿ) ಶರಣ್ಯ (ರಮೇಶ್ಚಂದ್ರ ಮತ್ತು ರಜನಿ ಬಿ. ದಂಪತಿಗಳ ಪುತ್ರಿ), ಹಾಗೂ ಸ್ಕೌಟ್ಸ್ ವಿಭಾಗದಲ್ಲಿ ಚೇತಕ್ ಟಿ.ಕೆ( ತಿಮ್ಮಪ್ಪ ನಾಯ್ಕ ಮತ್ತು ಇಂದ್ರಾವತಿ ದಂಪತಿಗಳ ಪುತ್ರ್ರ), ರಾಮನಾಥ (ಗಣೇಶ್ ಶೆಣೈ ಮತ್ತು ಸಂಧ್ಯಾ ದಂಪತಿಗಳ ಪುತ್ರ) ಇವರು ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ಗೈಡ್ಸ್ ಶಿಕ್ಷಕಿ ಹರಿಣಾಕ್ಷಿ ಮತ್ತು ಸ್ಕೌಟ್ಸ್ ಶಿಕ್ಷಕ ಶ್ರೀ ವಿಶ್ವನಾಥ ಮೂಡೂರು ರವರು ಮಾರ್ಗದರ್ಶನ ನೀಡಿರುತ್ತಾರೆ.