ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿ.ಎಸ್ಸಿ (ಇಂಟಿರಿಯರ್ ಡಿಸೈನ್)ಪರೀಕ್ಷೆಯಲ್ಲಿ ಶ್ರೀದೇವಿ ಕಾಲೇಜ್ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಶನ್, ಮಂಗಳೂರು ಇಲ್ಲಿನ ವಿದ್ಯಾರ್ಥಿನಿ ಕು. ವಾಣಿ ಶ್ರೀ ಇವರು 88.38% ಅಂಕಗಳೊಂದಿಗೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಇವರು ಬಡೆಕಿಲ ಸುಬ್ಬಣ್ಣ ಭಟ್ ಮತ್ತು ಸಂಧ್ಯಾ ಭಟ್ ದಂಪತಿಗಳ ಪುತ್ರಿ. ಇವರು ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ.